Ad image

ಮನೆಯಲ್ಲಿ ಎಲ್ಲರೂ ಇದ್ದಾಗಲೇ ಬಂದು ಒಂದೂವರೆ ಕೋಟಿ ರಾಬರಿ!

Team SanjeMugilu
2 Min Read

ಬೆಂಗಳೂರಿನ ಯಲಹಂಕದಲ್ಲಿ ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತಹ ರಾಬರಿ ನಡೆದಿದೆ. ನಾಲ್ವರು ಆರೋಪಿಗಳು ಮನೆಯಲ್ಲಿ ಎಲ್ಲರೂ ಇರುವಾಗಲೇ ಸೀದಾ ಎಂಟ್ರಿ ಕೊಟ್ಟು ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಭಯ ಮತ್ತು ಆತಂಕವನ್ನು ಹುಟ್ಟಿಸಿದೆ. ಸದ್ಯ ಪೊಲೀಸರು ತನಿಖೆಯಲ್ಲಿ ತೊಡಗಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಮನೆಯಲ್ಲಿ ಎಲ್ಲರೂ ಇದ್ದಾಗಲೇ ಈ ದರೋಡೆಕೋರರು ಬಂದು ದರೋಡೆ ಮಾಡಿಕೊಂಡು ಹೋಗುವುದಕ್ಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಬಹುದು. ಆದರೆ ಈ ಖದೀಮರು ಅದಕ್ಕೆ ಒಂದು ಮಾಸ್ಟರ್​ ಪ್ಲಾನ್ ಮಾಡಿದ್ದಾರೆ. ದರೋಡೆಕೋರರ ಸೋಗಿನಲ್ಲಿ ಅಲ್ಲ ಬದಲಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದಾರೆ.

ದರೋಡೆಕೋರರ ಪ್ಲಾನ್ಹೇಗಿತ್ತು ಗೊತ್ತಾ?

ಯಲಹಂಕದ ಮನೆಗೆ ಕನ್ನ ಹಾಕಿರುವ ದರೋಡೆಕೋರರು ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಬಂದು ಬರೋಡೆ ಮಾಡಿದ್ದಾರೆ. ಇನ್ನೋವಾ ಕಾರಿನಲ್ಲಿ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಒಂದು ಮನೆಗೆ ನುಗ್ಗಿದ್ದಾರೆ, ಒಂದುವರೆ ಕೋಟಿ ರೂಪಾಯಿ ನಗದು ಮತ್ತು 50 ಗ್ರಾಂ ಚಿನ್ನದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆಯು ಸ್ಥಳೀಯರಲ್ಲಿ ಭಯ ಮತ್ತು ಆತಂಕವನ್ನು ಮೂಡಿಸಿದೆ. ಪೊಲೀಸರು ಸದ್ಯ ಪ್ರಕರಣದ ತನಿಖೆಯಲ್ಲಿ ತೊಡಗಿದ್ದು, ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಜಮೀನು ಖರೀದಿಗಾಗಿ ಹಣ ತಂದಿಟ್ಟಿದ್ದ ಕುಟುಂಬ!

ಇನ್ನೂ ಘಟನೆ ಗಿರಿರಾಜು ಎಂಬುವರ ಮನೆಯಲ್ಲಿ ನಡೆದಿದೆ. ಗಿರಿರಾಜು ಜಮೀನು ಖರೀದಿಗಾಗಿ ಒಂದುವರೆ ಕೋಟಿ ನಗದು ತಂದು ಅಡುಗೆ ಮನೆಯಲ್ಲಿ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು. ಈ ವೇಳೆಯೇ ನಾಲ್ವರು ಆರೋಪಿಗಳು ಮನೆಗೆ ಬಂದರು. ಅವರು ಇನ್ ಕಮ್ ಟ್ಯಾಕ್ಸ್ ಆಫೀಸರ್ ಗಳಂತೆ ಹೇಳಿಕೊಂಡರು. ಬಿಳಿ ಶರ್ಟ್, ಟೈ ಹಾಕಿಕೊಂಡು, ಟಿಪ್‌ಟಾಪ್ ಆಗಿ ಅಧಿಕಾರಿಗಳಂತೆ ಕಾಣುತ್ತಿದ್ದರು. “ನಾವು ಡಿಪಾರ್ಟ್‌ಮೆಂಟ್‌ನವರು” ಎಂದು ಹೇಳಿ, ಮನೆಯವರನ್ನು ಭಯಭೀತರನ್ನಾಗಿಸಿದರು.

ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ!

ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು ಮೊದಲು ಅವರು ಮನೆಯವರ ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ. ನಂತರ, ಎಲ್ಲರನ್ನೂ ಒಂದು ಕಡೆ ಕೂರಿಸಿ, ಮನೆಯನ್ನು ಹುಡುಕಾಡಿದ್ದಾರೆ. “ನಿಮ್ಮ ಮನೆಯಲ್ಲಿ ಹಣ ಇದ್ಯಾ? ಹಣ ಎಲ್ಲಿದೆ?” ಎಂದು ಪ್ರಶ್ನೆ ಮಾಡಿದರು. ಗಿರಿರಾಜು ಮನೆಯಲ್ಲಿರಲಿಲ್ಲ. “ಅವರು ಇಲ್ಲ” ಎಂದು ಹೇಳಿದ್ದಕ್ಕೆ, ಆರೋಪಿಗಳು ಅಡುಗೆ ಮನೆಯಲ್ಲಿ ಬ್ಯಾಗ್‌ನಲ್ಲಿ ಇರಿಸಿದ್ದ ಹಣದ ಬ್ಯಾಗ್ ಅನ್ನು ಕಂಡುಹಿಡಿದರು. ನಂತರ ಬ್ಯಾಗ್​ ತೆಗೆದುಕೊಂಡು, 50 ಗ್ರಾಂ ಚಿನ್ನದ ಆಭರಣಗಳನ್ನೂ ದೋಚಿಕೊಂಡು ಪರಾರಿಯಾಗಿದ್ದಾರೆ. ಇನ್ನೋವಾ ಕಾರಿನಲ್ಲಿ ಬಂದಿದ್ದ ಆರೋಪಿಗಳು, ನಕಲಿ ನಂಬರ್ ಪ್ಲೇಟ್ ಬದಲಾಯಿಸಿ ಎಸ್ಕೇಪ್ ಆಗಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ!

ಘಟನೆಯ ನಂತರ, ಭಯಭೀತರಾದ ಮನೆಯವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ತಕ್ಷಣ ಕೇಸ್ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಬಂದ ಕಾರು ಮತ್ತು ಆರೋಪಿಗಳ ಚಿತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ರಾಬರಿ ಗ್ಯಾಂಗ್ ಅಧಿಕಾರಿಗಳಂತೆ ಬಂದು ಇಂತಹ ದಂಧೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳನ್ನು ಹುಡುಕಲು ತಂಡಗಳನ್ನು ರಚಿಸಲಾಗಿದ್ದು, ರಸ್ತೆಗಳಲ್ಲಿ   ಚೆಕಿಂಗ್ ಹೆಚ್ಚಿಸಿದ್ದಾರೆ.

ಈ ಘಟನೆಯು ಬೆಂಗಳೂರಿನಲ್ಲಿ ಸುರಕ್ಷತಾ ವ್ಯವಸ್ಥೆಯ ಕೊರತೆಯನ್ನು ಬಹಿರಂಗಪಡಿಸಿದೆ. ಇಂತಹ ರಾಬರಿಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ. ಪೊಲೀಸ್ ಅಧಿಕಾರಿಗಳು, “ಇಂತಹ ದೋಷಿಗಳನ್ನು ತ್ವರಿತವಾಗಿ ಬಂಧಿಸುವ ಆದೇಶ ನೀಡಲಾಗಿದ್ದು, ಜನರು ಎಚ್ಚರಿಕೆ ವಹಿಸಿ, ಅಪರಿಚಿತರನ್ನು ಮನೆಗೆ ಅನುಮತಿ ನೀಡಬೇಡಿ” ಎಂದು ಸಲಹೆ ನೀಡಿದ್ದಾರೆ. ಗಿರಿರಾಜು ಮನೆಯವರು ಈಗಲೂ ಭಯದಲ್ಲಿದ್ದಾರೆ. ಈ ರಾಬರಿ ಗ್ಯಾಂಗ್‌ನ ಹಿನ್ನೆಲೆಯನ್ನು ತಿಳಿಯಲು ಪೊಲೀಸ್ ಅಧಿಕೃತರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ದೋಷಿಗಳು ಜನರನ್ನು ಟಾರ್ಗೆಟ್​ ಮಾಡುತ್ತಿದ್ದು, ಜನರಿಗೆ ಸಾಕ್ಷ್ಯಸಾಧನೆಗಳನ್ನು ಪರಿಶೀಲಿಸಿ, ಪೊಲೀಸ್ ಸಹಾಯವನ್ನು ಕೇಳುವಂತೆ ಸಲಹೆ ನೀಡಲಾಗಿದೆ.

Share This Article