Ad image

ತಂದೆಯನ್ನು ನೆನೆದು ಭಾವುಕರಾದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್

Team SanjeMugilu
1 Min Read

ದಾವಣಗೆರೆ: ಅಗಲಿದ ಶಾಸಕ ಶಾಮನೂರು ಶಿವಶಂಕರಪ್ಪ  ಅವರನ್ನು ನೆನೆದು ಅವರ ಪುತ್ರ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್  ಭಾವುಕರಾದರು.

ದಾವಣಗೆರೆಯ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಕಳೆದ 15 ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಅನುಭವುಸುತ್ತಿದ್ದರು. ಇದು ವಯೋ ಸಹಜ ಕಾಯಿಲೆ ಹೀಗಾಗಿ ಅವರು ನಮ್ಮನ್ನಗಲಿದ್ದಾರೆ. ಬಹಳ ಕಷ್ಟದಿಂದ ಬೆಳೆದವರು ನನಗೆ ಆ ಕಷ್ಟ ಇಲ್ಲ. ತಮ್ಮ ತಂದೆ ಕಷ್ಟದಲ್ಲಿಯೇ ಹುಟ್ಟಿ, ಕಷ್ಟ ಅನುಭವಿಸಿಯೇ ಬೆಳೆದರು. ಅವರಲ್ಲಿ ಇರುವ ಸಾಮಾನ್ಯಜ್ಞಾನ ಮಾತ್ರ ಮೆಚ್ಚುವಂತಹದ್ದು. ಮೊದಲು ಉದ್ಯಮ ಹಾಗೂ ನಂತರ ರಾಜಕೀಯದಲ್ಲಿ ಬೆಳೆದರು. ನಮ್ಮ ತಾತ ಕೂಡಾ ಡಿ.16ಕ್ಕೆ ನಿಧನರಾಗಿದ್ದರು ತಂದೆ 14ಕ್ಕೆ ನಿಧನರಾಗಿದ್ದಾರೆ ಎಂದು ಭಾವುಕರಾದರು.

Share This Article